ಸಾಮಿ ಅಸೋಸಿಯೇಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದಾರಾಜು ಅವರು ನಿರ್ಮಿಸಿರುವ ‘ಭಾಗ್ಯರಾಜ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದೀಪಕ್ ಮಧುವನಹಳ್ಳಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಮಂಜುನಾಥ.ಬಿ.ನಾಯಕ ಛಾಯಾಗ್ರಹಣ, ಕುಬೇಂದ್ರನ್ ಸಂಕಲನ, ಕುನ್ಫು ಚಂದ್ರು ಸಾಹಸ ನಿರ್ದೇಶನ ಹಾಗೂ ಮದನ್ - ಹರಿಣಿ, ಧನ್ಕುಮಾರ್, ಕಲಿ, ಮುರಳಿ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮಹೇಶ್, ಜಾಹ್ನವಿ ಕಾಮತ್, ಸಂಕೇತ್ ಕಾಶಿ, ನಾಗೇಂದ್ರ ಶಾ, ಸುಧಾಕರ್, ಮಿಮಿಕ್ರಿ ಗೋಪಿ, ರೂಪೇಶ್ ಕುಮಾರ್, ಆರೋಹಿತ ಗೌಡ, ಮೈಸೂರು ಶ್ರೀಕಂಠು, ನಟರಾಜ್ ಮುಂತಾದವರಿದ್ದಾರೆ.